ವೆಂಕಟ್ ಮಾವೀಸ್ ಲಾಂಛನದಲ್ಲಿ ವೆಂಕಟ್(ನಾಟಿಕೋಳಿ) ಅವರು ನಿರ್ಮಿಸುತ್ತಿರುವ ಹಾಗೂ ಶ್ರೀನಿವಾಸರಾಜು ನಿರ್ದೇಶಿಸುತ್ತಿರುವ ‘ದಂಡುಪಾಳ್ಯ ಭಾಗ ೨ ಚಿತ್ರದ ಮುಹೂರ್ತ ಸಮಾರಂಭ ವರಪ್ರದ ಶ್ರೀಶ್ರೀನಿವಾಸ ಸಮೇತ ಶ್ರೀಶಕ್ತಿ ವಿಜಯ ಗಣಪತಿ ದೇವಸ್ಥಾನದಲ್ಲಿ ನಡೆಯಿತು.
ಚಿತ್ರದ ಪ್ರಥಮ ಸನ್ನಿವೇಶಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಶ್ರೀಸಾ.ರಾ.ಗೋವಿಂದು ಅವರು ಆರಂಭ ಫಲಕ ತೋರಿದರು. ಶ್ರೀಹೆಚ್.ಡಿ.ಗಂಗರಾಜ್ ಕ್ಯಾಮೆರಾ ಚಾಲನೆ ಮಾಡಿದರು.
ಹಿಂದೆ ದಂಡುಪಾಳ್ಯ ಚಿತ್ರವನ್ನು ನಿರ್ದೇಶಿಸಿದ್ದಶ್ರೀನಿವಾಸರಾಜು ಅವರೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೆಂಕಟ್ಪ್ರಸಾದ್ ಛಾಯಾಗ್ರಹಣ, ರವಿಚಂದ್ರನ್ ಸಂಕಲನ, ಹಾಗೂ ಪ್ರಭು ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ. ಪೂಜಾಗಾಂಧಿ, ಮಕರಂದ ದೇಶಪಾಂಡೆ, ರವಿಕಾಳೆ, ಕರಿಸುಬ್ಬು, ರವಿಶಂಕರ್, ಶ್ರುತಿ, ಸುಚೀಂದ್ರಪ್ರಸಾದ್, ಯತಿರಾಜ್, ಮುನಿ, ಡ್ಯಾನಿ, ಜಯದೇವ್, ಪೆಟ್ರೋಲ್ ಪ್ರಸನ್ನ, ಸಂಜನ ಮುಂತಾದವರಿದ್ದಾರೆ.